ಪೋಸ್ಟ್‌ಗಳು

Part - 65

ಮೂಲ : ಇದಂ ಶರೀರಂ ಶ್ರು ಣು ಸೂಕ್ಷ್ಮ ಸಂಜ್ಞಿತಂ ಲಿಂಗಂ ತ್ವಪಂಚೀಕೃತಭೂತ _ ಸಂಭವಮ್ | ಸವಾಸನಂ ಕರ್ಮಫಲಾನುಭಾವಕಂ ಸ್ವಾಜ್ಞಾನತೋ s ನಾದಿರುಪಾಧಿರಾತ್ಮನಃ || ೯೬ || ಪ್ರತಿಪದಾರ್ಥ : ಸೂಕ್ಷ್ಮ ಸಂಜ್ಞಿತಂ = ಸೂಕ್ಷ್ಮವೆಂಬ ಹೆಸರುಳ್ಳ , ಅಪಂಚೀಕೃತಭೂತ _ ಸಂಭವಂ = ಪಂಚೀಕೃತವಾಗದ ಭೂತಗಳಿಂದ ಹುಟ್ಟಿದ , ಸವಾಸನಂ = ವಾಸನೆಯಿಂದ ಕೂಡಿರುವ , ಕರ್ಮಫಲಾನುಭಾವಕಂ = ಕರ್ಮಫಲಗಳ ಅನುಭವವನ್ನು ಉಂಟುಮಾಡುವ , ಇದಂ ಲಿಂಗಂ ಶರೀರಂತು , ಈ ಲಿಂಗಶರೀರದ ವಿಷಯವನ್ನು , ಶ್ರು ಣು = ಕೇಳು , ಸ್ವ _ ಜ್ಞಾನತಃ = ( ಇದು ) ತನ್ನ ಸ್ವರೂಪವನ್ನು ತಿಳಿಯದಿರುವುದರಿಂದ , ಆತ್ಮನಃ = ಆತ್ಮನಿಗೆ , ಅನಾದಿಃ = ಅನಾದಿಯಾದ , ಉಪಾಧೀಃ = ಉಪಾಧಿಯು . ತಾತ್ಪರ್ಯ : ಸೂಕ್ಷ್ಮಶರೀರವೆಂಬ ಹೆಸರುಳ್ಳ , ಪಂಚೀಕೃತವಾಗದ ಭೂತಗಳಿಂದ ಹುಟ್ಟಿದ , ವಾಸನೆಯಿಂದ ಕೂಡಿರುವ ಮತ್ತು ಕರ್ಮಫಲಗಳ ಅನುಭವವನ್ನು ಉಂಟುಮಾಡುವ ಈ ಲಿಂಗಶರೀರದ ವಿಷಯವನ್ನು ಕೇಳು ; ಇದು ಸ್ವಸ್ವರೂಪವನ್ನು ತಿಳಿಯದೇ ಇರುವುದರಿಂದ ಆತ್ಮನಿಗೆ ಎಂದೂ ಉಪಾಧಿ ಎನಿಸಿದೆ . ವಿವರಣೆ : ಸ್ಥೂಲಶರೀರದ ನಿರೂಪಣೆಯ ಬಳಿಕ ಗುರುವು 'ಇದಂ ‌ಶರೀರಂ..' ಎಂಬ ಶ್ಲೋಕದ ಮೂಲಕ ಸೂಕ್ಷ್ಮ ಶರೀರದ ವಿವರಣೆಗೆ ಮುಂದಾಗುತ್ತಾರೆ.  ಪಂಚೀಕೃತವಾಗದ ಎಂದರೆ , ಬಿಡಿಯಾಗಿರುವ ಪಂಚಭೂತಗಳಿಂದ ಹುಟ್ಟಿರುವುದು ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ . ಆಕಾಶ , ಪೃಥ್ವಿ , ಬೆಂಕಿ , ಗಾಳಿ , ನೀರು ಇ...

Part - 64

ಮೂಲ : ವಾಗಾದಿ ಪಂಚ ಶ್ರವಣಾದಿ ಪಂಚ ಪ್ರಾಣಾದಿ ಪಂಚಾಭ್ರಮುಖಾನಿ ಪಂಚ | ಬುದ್ಧ್ಯಾದ್ಯ ವಿದ್ಯಾಪಿ ಚ ಕಾಮ _ ಕರ್ಮಣೀ ಪುರ್ಯಷ್ಟಕಂ ಸೂಕ್ಷ್ಮಶರೀರಮಾಹುಃ || ೯೫ || ಪ್ರತಿಪದಾರ್ಥ : ವಾಗಾದಿ ಪಂಚ = ವಾಕ್ಕು ಮೊದಲಾದ ಐದು , ಶ್ರವಣಾದಿ ಪಂಚ = ಕಿವಿ  ಮೊದಲಾದ ಐದು , ಪ್ರಾಣಾದಿ ಪಂಚ = ಪ್ರಾಣವೇ ಮೊದಲಾದ ಐದು , ಅಭ್ರಮುಖಾನಿ ಪಂಚ = ಆಕಾಶವೇ ಮೊದಲಾದ ಐದು , ಬುದ್ಧ್ಯಾದಿ = ಬುದ್ಧಿಯೇ ಮೊದಲಾದ , ಅವಿದ್ಯಾ = ಅವಿದ್ಯೆ ( ಅಜ್ಞಾನ ), ಕಾಮ _ ಕರ್ಮಣೀ = ಕಾಮ ಮತ್ತು ಕರ್ಮ , ಪುರ್ಯಷ್ಟಕಂ = ಈ ಎಂಟು ಪುರಗಳನ್ನು , ಸೂಕ್ಞ್ಮ ಶರೀರಂ = ಸೂಕ್ಷ್ಮ ಶರೀರವೆಂದು , ಆಹುಃ = ಹೇಳುತ್ತಾರೆ . ತಾತ್ಪರ್ಯ : ವಾಕ್ ಮೊದಲಾದ ಐದು , ಕಿವಿ ಮೊದಲಾದ ಐದು , ಪ್ರಾಣವೇ ಮೊದಲಾದ ಐದು ,   ಆಕಾಶವೇ ಮೊದಲಾದ ಐದು , ಬುದ್ಧಿ ಮೊದಲಾದ ನಾಲ್ಕು , ಅವಿದ್ಯಾ , ಕಾಮ ಮತ್ತು ಕರ್ಮ ; ಈ ಎಂಟು ಪುರಗಳಿಂದ ಆಗಿರುವುದನ್ನು ಸೂಕ್ಷ್ಮ ಶರೀರವೆಂದು ಹೇಳುತ್ತಾರೆ . ವಿವರಣೆ : ಆತ್ಮಾನಾತ್ಮ ವಿವೇಕವನ್ನು ಹೇಳುತ್ತೇನೆ ಕೇಳು ಎಂದು ಆರಂಭಿಸಿದ ಗುರುವು ಮೊದಲಿಗೆ ಸೂಕ್ಷ್ಮ ವು ಸ್ಥೂಲವಾಗುವುದನ್ನು ವರ್ಣಿಸಿ , ವಿಷಯನಿಂದನೆ , ದೇಹಾಸಕ್ತಿಯ ನಿಂದನೆಯ ಮೂಲಕ ಶರೀರವು ಆತ್ಮನಿಂದ ಬೇರೆಯಾದುದು ಎಂಬುದನ್ನು ನಿರೂಪಿಸುತ್ತಾರೆ . ಸೂಕ್ಷ್ಮ ಶರೀರವು ಕರ್ಮೇಂದ್ರಿಯಗಳು ಹಾಗೂ ಜ್ಞಾನೇಂದ್ರಿಯಗಳ ಹಂಗಿಗೆ ಒಳಪಡುವುದರಿಂ...

Part -63

ಮೂಲ : ಪ್ರಾಣಾಪಾನ _ ವ್ಯಾನೋದಾನ _ ಸಮಾನಾ _ ಭವತ್ಯಸೌ ಪ್ರಾಣಃ | ಸ್ವಯಮೇವ ವೃತ್ತಿಭೇದಾದ್ವಿಕೃತೇರ್ಭೇದಾತ್ ಸುವರ್ಣಸಲಿಲವತ್ || ೯೪ || ಪ್ರತಿಪದಾರ್ಥ : ವಿಕೃತೇಃ ಭೇದಾತ್ = ವಿಕಾರಭೇದದಿಂದ , ಸುವರ್ಣ_ ಸಲಿಲವತ್ = ಬಂಗಾರ _ ನೀರು ಇವುಗಳಂತೆ , ಅಸೌ ಪ್ರಾಣಃ = ಈ ಪ್ರಾಣವು , ವೃತ್ತಿ ಭೇದಾತ್ = ವೃತ್ತಿ ಭೇದದಿಂದ , ಸ್ವಯಮ್ ಏವ = ತಾನೊಂದೇ , ಪ್ರಾಣ _ ಅಪಾನ _ ವ್ಯಾನ _ ಉದಾನ _ ಸಮಾನಾಃ = ಪ್ರಾಣ _ ಅಪಾನ _ ವ್ಯಾನ _ ಉದಾನ _ ಸಮಾನ , ಭವತಿ = ಆಗುತ್ತದೆ . ತಾತ್ಪರ್ಯ : ಬಂಗಾರ , ನೀರು ಇವು ಹೇಗೆ ಆಕಾರ _ ವಿಕಾರ ಭೇದದಿಂದ ಕೂಡಿವೆಯೋ , ಹಾಗೆಯೆ ಈ ಪ್ರಾಣವು ತಾನೊಂದೇ ಆಗಿದ್ದರೂ ಕ್ರಿಯಾ ಭೇದದಿಂದ ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬ ಹೆಸರುಗಳನ್ನು ಪಡೆಯುತ್ತದೆ . ವಿವರಣೆ : ಪಂಚಭೂತಗಳ ವ್ಯಷ್ಟಿಯಿಂದ ಹುಟ್ಟುವ ಸೂಕ್ಷ್ಮ ಶರೀರಕ್ಕೆ ಸೇರಿದ ಪಂಚಪ್ರಾಣಗಳ ನಿರೂಪಣೆಯನ್ನು ' ಪ್ರಾಣಾಪಾನ ...’ ಎಂಬ ಶ್ಲೋಕದ ಮೂಲಕ ಮಾಡುತ್ತಾರೆ . ಬಂಗಾರವನ್ನು ಸುಮ್ಮನೆ ಚಿನ್ನ ಅಥವಾ ಸುವರ್ಣ ಎಂದ ಮಾತ್ರಕ್ಕೆ ಅದರ ಆಕಾರ ನಮಗೆ ತಿಳಿಯುವುದಿಲ್ಲ . ಬಳೆ , ಓಲೆ , ಕೊರಳಸರ , ಗೆಜ್ಜೆ ಮುಂತಾದ ಹೆಸರುಗಳಿಂದ ಕರೆದಾಗ ಅದರ ರೂಪ ಮತ್ತು ಬೆರಗು ನಮಗೆ ಗೊತ್ತಾಗುತ್ತದೆ . ನೀರನ್ನು ಯಾವ ಪಾತ್ರೆಯಲ್ಲಿ ಅಥವಾ ಪಾತ್ರದಲ್ಲಿ ಕಲ್ಪಿಸಿಕೊಳ್ಳುವೆವೋ , ಅದೇ ಆಕಾರದಲ್ಲಿ ನಮಗೆ ಕಾಣುತ್ತದೆ . ತ...

Part -62

ಮೂಲ: ನಿಗದ್ಯತೇಂತಃಕರಣಂ ಮನೋಧೀ_ ರಹಂಕೃತಿಶ್ಚಿ ತ್ತಮಿತಿ ಸ್ವವೃತ್ತಿಭಿಃ | ಮನಸ್ತು ಸಂಕಲ್ಪ ವಿಕಲ್ಪನಾದಿಭಿ_ ರ್ಬುದ್ಧಿಃ ಪದಾರ್ಥಾಧ್ಯವಸಾಯಧರ್ಮತಃ ||೯೨|| ಅತ್ರಾಭಿಮಾನಾದಹಮಿತ್ಯಹಂಕೃತಿಃ | ಸ್ವಾರ್ಥಾನುಸಂಧಾನ_ಗುಣೇನ ಚಿತ್ತಮ್ ||೯೩|| ಪ್ರತಿಪದಾರ್ಥ: ಅಂತಃಕರಣಂ=ಅಂತಃಕರಣವು, ಸ್ವ _ವೃತ್ತಿಭಿಃ=ತನ್ನ ವೃತ್ತಿಗಳಿಗೆ ಅನುಸಾರವಾಗಿ, ಮನಃ = ಮನಸ್ಸು, ಧೀಃ =ಬುದ್ಧಿ, ಅಹಂಕೃತಿಃ = ಅಹಂಕಾರ, ಚಿತ್ತಂ=ಚಿತ್ತ, ಇತಿ= ಎಂದು, ನಿಗದ್ಯತೇ=ಹೇಳಲಾಗಿದೆ; ಸಂಕಲ್ಪ_ವಿಕಲ್ಪನಾದಿಭಿಃ ತು = ಸಂಕಲ್ಪ ವಿಕಲ್ಪ ಮೊದಲಾದವುಗಳಿಂದ, ಮನಃ = ಮನಸ್ಸೆಂದೂ, ಪದಾರ್ಥ_ಅಧ್ಯವಸಾಯ_ಧರ್ಮತಃ = ವಸ್ತುಗಳನ್ನು ನಿಶ್ಚಯಿಸುವ ಧರ್ಮವುಳ್ಳದ್ದರಿಂದ, ಬುದ್ಧಿಃ = ಬುದ್ಧಿಯೆಂದೂ, ಅತ್ರ = ಈ ಶರೀರದಲ್ಲಿ, ಅಹಂ = ನಾನು, ಇತಿ = ಎಂದು, ಅಭಿಮಾನಾತ್ = ಅಭಿಮಾನವಿರುವುದರಿಂದ, ಅಹಂಕೃತಿಃ = ಅಹಂಕಾರವೆಂದೂ, ಸ್ವಾರ್ಥಾನು_ಸಂಧಾನ_ಗುಣೇನ = ಸ್ವಸುಖ ಸಾಧನಗಳನ್ನು ಕುರಿತು ಚಿಂತಿಸುವುದರಿಂದ, ಚಿತ್ತಂ = ಚಿತ್ತವೆಂದೂ, (ಹೇಳಲಾಗಿದೆ). ತಾತ್ಪರ್ಯ: ಅಂತಃಕರಣವನ್ನು ಅದರ ಸ್ವಭಾವ ಅಥವಾ ವೃತ್ತಿಯಿಂದ ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಎಂದು ಹೇಳಲಾಗಿದೆ. ಸಂಕಲ್ಪ ವಿಕಲ್ಪಗಳ ಚಿಂತನೆಯನ್ನು ಮಾಡುವುದರಿಂದ ಮನಸ್ಸೆಂದೂ, ವಸ್ತುಗಳನ್ನು ನಿಶ್ಚಯಿಸುವ ಧರ್ಮವುಳ್ಳದ್ದರಿಂದ ಬುದ್ಧಿಯೆಂದೂ, ಈ ಶರೀರದಲ್ಲಿ ನಾನು_ನನ್ನದು ಎಂಬ ಅಭಿಮಾನ ಹುಟ್ಟಿಸುವುದರಿಂದ ಅಹಂಕಾರವೆಂದೂ, ತನ್ನ ಸುಖ ಸಾಧನಗ...

Part - 61

ಮೂಲ: ಬುದ್ಧೀಂದ್ರಿಯಾಣಿ ಶ್ರವಣಂ ತ್ವಗಕ್ಷಿ ಘ್ರಾಣಂ ಚ ಜಿಹ್ವಾ ವಿಷಯಾವಬೋಧನಾತ್ | ವಾಕ್ಪಾಣಿಪಾದಾ ಗುದಮಪ್ಯುಪಸ್ಥಃ ಕರ್ಮೇಂದ್ರಿಯಾಣಿ ಪ್ರವಣೇನ ಕರ್ಮಸು ||೯೧|| ಪ್ರತಿಪದಾರ್ಥ: ಬುದ್ಧೀಂದ್ರಿಯಾಣಿ = ಜ್ಞಾನೇಂದ್ರಿಯಗಳು, ಶ್ರವಣಂ = ಕಿವಿ, ತ್ವಕ್ = ಚರ್ಮ, ಅಕ್ಷಿ = ಕಣ್ಣು, ಘ್ರಾಣಂ = ಮೂಗು , ಜಿಹ್ವಾ ಚ = ಮತ್ತು ನಾಲಗೆ , ವಿಷಯಾವಬೋಧನಾತ್ = (ಇವು) ವಿಷಯಗಳನ್ನು ತಿಳಿಸುವುದರಿಂದ , ವಾಕ್-ಪಾಣಿ=ಪಾದಾಃ = ಮಾತು(ಬಾಯಿ) ಕೈ-ಕಾಲುಗಳು, ಗುದಮ್ = ಮಲದ್ವಾರ , ಉಪಸ್ಥಃ ಅಪಿ = ಮೂತ್ರದ್ವಾರ -ಇವು, ಕರ್ಮಸು = ಕರ್ಮಗಳಲ್ಲಿ , ಪ್ರವಣೇನ = ಪ್ರವೃತ್ತವಾಗಿರುವುದರಿಂದ, ಕರ್ಮೇಂದ್ರಿಯಾಣಿ = ಕರ್ಮೇಂದ್ರಿಯಗಳು. ತಾತ್ಪರ್ಯ: ಕಿವಿಗಳು, ಚರ್ಮ, ಕಣ್ಣುಗಳು, ಮೂಗು ಮತ್ತು ನಾಲಗೆ ಇವು ವಿಷಯಗಳನ್ನು ತಿಳಿಸುವುದರಿಂದ ಜ್ಞಾನೇಂದ್ರಿಯಗಳು ಎನಿಸಿಕೊಳ್ಳುತ್ತವೆ. ವಾಕ್ಕು (ಮಾತು_ಬಾಯಿ) , ಕೈ-ಕಾಲುಗಳು, ಮಲದ್ವಾರ ಮತ್ತು ಮೂತ್ರದ್ವಾರ ಇವು ಕರ್ಮದಲ್ಲಿ ಪ್ರವೃತ್ತವಾಗುವುದರಿಂದ ಕರ್ಮೇಂದ್ರಿಯಗಳು ಎನಿಸಿವೆ. ವಿವರಣೆ: ಅನಾತ್ಮವಾದ ಸ್ಥೂಲದೇಹವನ್ನೂ , ಅದರಿಂದ ಒದಗಿ ಬರುವ ಸಂಸಾರ ಬಂಧವನ್ನು ವರ್ಣಾಶ್ರಮಾದಿ ನಿಯಮಗಳ ಅನುಷ್ಠಾನದಿಂದ ಕಂಡುಕೊಳ್ಳುವ ಬಗೆಯನ್ನು ನಿರೂಪಿಸಿದ ಬಳಿಕ, ಶರೀರದ ದಶೇಂದ್ರಿಯಗಳು, ಅಂತಃಕರಣ ಚತುಷ್ಟಯ, ಪಂಚಪ್ರಾಣಗಳು ಹಾಗೂ ಪುರ್ಯಷ್ಟಕದ ಮೂಲಕ ಸೂಕ್ಷ್ಮಶರೀರದ ವಿವರಣೆಗೆ ಮುಂದಾಗುತ್ತಾರೆ. ಮೊದಲಿಗೆ ಶರೀರದ ಹತ್ತು ಇಂದ್ರಿಯಗ...

Part -60

ಮೂಲ: ಸ್ಥೂಲಸ್ಯ ಸಂಭವ -ಜರಾ-ಮರಣಾನಿ ಧರ್ಮಾಃ  ಸ್ಥೌಲ್ಯಾದಯೋ ಬಹುವಿಧಾಃ ಶಿಶುತಾದ್ಯವಸ್ಥಾಃ | ವರ್ಣಾಶ್ರಮಾದಿ-ನಿಯಮಾ ಬಹುssಮಯಾಃ ಸ್ಯುಃ ಪೂಜಾವಮಾನ-ಬಹುಮಾನ-ಮುಖಾ ವಿಶೇಷಾಃ ||೯೦|| ಪ್ರತಿಪದಾರ್ಥ : ಸ್ಥೂಲಸ್ಯ = ಸ್ಥೂಲಶರೀರಕ್ಕೆ , ಸಂಭವ-ಜರಾ-ಮರಣಾನಿ = ಹುಟ್ಟು-ಮುಪ್ಪು-ಸಾವು (ಇವು) , ಸ್ಥೌಲ್ಯಾದಯಃ=ಸ್ಥೂಲತ್ವ ಮೊದಲಾದ, ಬಹುವಿಧಾಃ=ಬಹು ವಿಧವಾದ, ಧರ್ಮಾಃ=ಲಕ್ಷಣಗಳು ; ಶಿಶುತಾದಿ-ಅವಸ್ಥಾಃ=ಶಿಶುತ್ವ ಮೊದಲಾದ ಅವಸ್ಥೆಗಳು, ವರ್ಣಾಶ್ರಮಾದಿ-ನಿಯಮಾಃ = ವರ್ಣಾಶ್ರಮಗಳೇ ಮೊದಲಾದ ನಿಯಮಗಳು, ಬಹುಧಾ-ಆಮಯಾಃ=ನಾನಾವಿಧವಾದ ರೋಗಗಳು, ಪೂಜಾ-ಅವಮಾನ-ಬಹುಮಾನ-ಮುಖಾಃ=ಪೂಜೆ-ಅವಮಾನ-ಬಹುಮಾನ-ಮುಂತಾದ, ವಿಶೇಷಾಃ=ವಿಶೇಷಗಳು, ಸ್ಯುಃ=ಇವೆ. ತಾತ್ಪರ್ಯ: ಹುಟ್ಟು-ಮುಪ್ಪು-ಸಾವು ಮುಂತಾದವು ಸ್ಥೂಲ ಶರೀರದ ಧರ್ಮ ಅಥವಾ ಲಕ್ಷಣಗಳು. ಬಾಲ್ಯ, ಕೌಮಾರ, ಯೌವನ ಮೊದಲಾದವು ಅದರ ಅವಸ್ಥೆಗಳು. ಇದಕ್ಕೆ ಜಾತಿ ಹಾಗೂ ಆಶ್ರಮ ನಿಯಮಗಳಿದ್ದು ನಾನಾ ಬಗೆಯ ರೋಗಗಳನ್ನು ಅನುಭವಿಸುತ್ತದಲ್ಲದೆ ಸತ್ಕಾರ, ತಿರಸ್ಕಾರ, ಹೊಗಳಿಕೆ ಮೊದಲಾದ ವಿಶೇಷಗಳೂ ಇವೆ. ವಿವರಣೆ: ಸ್ಥೂಲಶರೀರದ ಅಂತರ್ಬಾಹ್ಯ ಸಂಸಾರವನ್ನು ಈ ಶ್ಲೋಕದಲ್ಲಿ ವಿವರವಾಗಿ ತೆರೆದಿಡುತ್ತಾರೆ.  ಹುಟ್ಟುವುದು, ಬದುಕುವುದು (ಇರುವುದು) , ಬೆಳೆಯುವುದು, ಹೊಂದಿಕೊಳ್ಳುವುದು (ಪರಿಣಮಿಸುವುದು), ಕ್ಷಯವಾಗುವುದು ಮತ್ತು ಸಾಯುವುದು (ನಾಶವಾಗುವುದು) ಇವು ಶರೀರದ ಆರು ವಿಕಾರಗಳೆಂದು ಮಹರ್ಷಿ ಯಾಸ್ಕರು ತಮ್ಮ ...

Part - 59

ಮೂಲ: ಸರ್ವೋsಪಿ ಬಾಹ್ಯಸಂಸಾರಃ ಪುರುಷಸ್ಯ ಯದಾಶ್ರಯಃ | ವಿದ್ಧಿ ದೇಹಮಿದಂ ಸ್ಥೂಲಂ ಗೃಹವದ್ ಗೃಹಮೇಧಿನಃ || ೮೯|| ಪ್ರತಿಪದಾರ್ಥ: ಪುರುಷಸ್ಯ = ಪುರುಷನಿಗೆ (ಮನುಷ್ಯ), ಸರ್ವಃ ಅಪಿ ಬಾಹ್ಯಸಂಸಾರಃ = ಎಲ್ಲ ಹೊರಗಿನ ವ್ಯವಸ್ಥೆಯೂ(ಸಂಸಾರವು), ಯದಾಶ್ರಯಃ = ಯಾವುದನ್ನು ನೆಚ್ಚಿಕೊಂಡಿದೆಯೋ, ಇದಂ ಸ್ಥೂಲಂ ದೇಹಂ = ಇಂತಹ ಸ್ಥೂಲ ಶರೀರವನ್ನು, ಗೃಹಮೇಧಿನಃ = ಗೃಹಸ್ಥನ, ಗೃಹವತ್ = ಮನೆಯಂತೆ, ವಿದ್ಧಿ = ತಿಳಿ. ತಾತ್ಪರ್ಯ: ಮನುಷ್ಯನ (ಬಾಹ್ಯಸಂಸಾರ) ಹೊರಗಿನ ಎಲ್ಲ ಆಗುಹೋಗುಗಳು ಯಾವುದನ್ನು ನೆಚ್ಚಿಕೊಂಡಿದೆಯೋ, ಅಂಥ ಈ ಸ್ಥೂಲಶರೀರವನ್ನು ಗೃಹಸ್ಥನ ಮನೆ ಎಂದು ತಿಳಿ. ವಿವರಣೆ: ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಸೂರು ಎನ್ನುವುದು ತುಂಬ ಮುಖ್ಯವಾದುದು. ಎಲ್ಲರೂ ಅವರ ಅನುಕೂಲ, ಆದಾಯದ ಇತಿಮಿತಿಯ ಅನುಸಾರ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಬದುಕಿರುವಾಗ ನಾನು ನಿರ್ಮಿಸಿದ ಮನೆ, ನನ್ನ ಇಚ್ಚೆಗೆ ತಕ್ಕಂತೆಯೇ ಅಲಂಕೃತಗೊಂಡ ಗೃಹವಿದು ಎಂಬ ಭಾವ ಇದ್ದೇ ಇರುತ್ತದೆ. ಏನೇ ಅಹಂಭಾವವಿದ್ದರೂ ಜಗತ್ತನ್ನು ಬಿಟ್ಟು ತೆರಳುವಾಗ ಮನೆ, ಮಂದಿರಗಳಾವುದೂ ನಮ್ಮ ಜತೆ ಬರುವುದಿಲ್ಲ. ಯಾರೂ ಅದನ್ನು ತನ್ನ ಆತ್ಮವೆಂದು ಪೋಷಿಸುವುದಿಲ್ಲ (ಪೋಷಣೆ ಸರ್ವಥಾ ಸಲ್ಲದು ಎನ್ನುವುದು ಪರೋಕ್ಷ ನಿರೂಪಣೆ). ಹಾಗೆಯೇ ಸೂಕ್ಷ್ಮ ಭೂತಗಳಿಂದ ರೂಪುಗೊಂಡ ಈ ಸ್ಥೂಲಶರೀರದಲ್ಲಿ 'ನಾನು' ‘ನನ್ನದು' ಎಂಬ ಅಭಿಮಾನವನ್ನು ಎಂದಿಗೂ ಮಾಡಬಾರದು ಎಂದು ಹೇಳುತ್ತಾರೆ. ಸ್ಥೂಲದೇಹದಿಂದ ಆತ್...